ರಸ್ತೆ ಮಾತ್ರವಲ್ಲ ನಿನ್ನ ಮದುವೆ ಕೂಡಾ ಮಾಡುತ್ತೇನೆ ಎಂದ ದಾವಣಗೆರೆ ಡಿಸಿ! | ಜನತಾ ನ್ಯೂಸ್
ದಾವಣಗೆರೆ : ತಾಲೂಕಿನ ಎಚ್.ರಾಂಪುರ ಗ್ರಾಮದ ಆರ್.ಡಿ. ಬಿಂದು ಎಂಬ ಶಿಕ್ಷಕಿ ತಮ್ಮೂರಿಗೆ ಹೋಗಲು ರಸ್ತೆ ನಿರ್ಮಾಣವಾಗಿ, ಬಸ್ ಸೌಲಭ್ಯ ಕಲ್ಪಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದರು.
ದಾವಣಗೆರೆ ತಾಲೂಕಿನ ರಾಂಪುರ ಗ್ರಾಮಕ್ಕೆ ಸೂಕ್ತ ರಸ್ತೆಯಿಲ್ಲ. ಹೀಗಾಗಿ ಈ ಗ್ರಾಮದ ಯುವಕ- ಯುವತಿಯರಿಗೆ ಮದುವೆ ಭಾಗ್ಯ ಇಲ್ಲದಂತಾಗಿದೆ. ಯುವತಿಯೊಬ್ಬಳು ಕೂಡ ರಸ್ತೆ ಆಗುವವರೆಗೆ ಮದುವೆ ಆಗಲ್ಲ ಅಂತ ಪಟ್ಟು ಹಿಡಿದಿದ್ದಳು. ಈಗ ಜಿಲ್ಲಾಧಿಕಾರಿ ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಯನ್ನು ಆಲಿಸಿದ್ದಾರೆ. ಈ ವೇಳೆ ನಾಳೆಯಿಂದಲೇ ರಸ್ತೆ ಕಾಮಗಾರಿಗೆ ಆರಂಭಕ್ಕೆ ಆದೇಶ ಮಾಡಿದ್ದಾರೆ.
ಇದೇ ವೇಳೆ ಪತ್ರ ಬರೆದ ಬಿಂದುಳಿಗೆ ಪೋನ್ ಮಾಡಿ, ರಸ್ತೆ ಮಾಡಿಸಿ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇನೆ. ಬಸ್ಸ್ ಹಾಗೂ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಮಾಡುವೆ. ಜೊತೆಗೆ ನಿನಗೊಂದು ಗಂಡು ಹುಡುಕಿ ಮದುವೆ ಕೂಡಾ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಕಾಟ, ನೆಟ್ವರ್ಕ್ ತೊಂದರೆ, ಗುಡ್ಡಗಾಡು ಪ್ರದೇಶದ ಸಂಕಷ್ಟಗಳು, ರಸ್ತೆ ಹಾಳಾಗಿರುವುದು, ಬಸ್ ಬಾರದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.